shivaraju tr thoremane
Thursday, November 26, 2015
ಶಿವರಾಜು ತೊರೆಮನೆ
"ಗ್ರೀಕ್ ನಾಗರಿಕತೆ"
ಶಿವರಾಜು ಟಿ.ಆರ್
ಯುರೋಪ್ ಖಂಡದಲ್ಲಿ ನಾಗರಿಕತೆಗೆ ಬುನಾದಿಯನ್ನು ಹಾಕಿದ ಮೊದಲಿಗರು - ಗ್ರೀಕರು
ಗ್ರೀಕರು ಈ ಪಂಗಡಕ್ಕೆ ಸೇರಿದವರು - ಇಂಡೋ - ಯೋರೋಪಿಯನ್
ಗ್ರೀಕರು ಈ ನದಿಯ ದಂಡೆಯ ಮೇಲೆ ಬಂದು ನೆಲೆಸಿದರು - ಡ್ಯಾನ್ಯೂಬ್
ನಗರ ರಾಜ್ಯಗಳ ಕಲ್ಪನೆಯನ್ನು ಮೊದಲು ತಂದವರು - ಗ್ರೀಕರು
ಗ್ರೀಕ್ ನ ಪ್ರಮುಖ ನಗರ ರಾಜ್ಯಗಳು - ಅಥೇನ್ಸ್ , ಸ್ಪಾರ್ಟಾ , ಹಾಗೂ ಕೊರಿಂಥ್
ಸೈನಿಕ ಶಕ್ತಿಗೆ ಹೆಸರಾದ ಗ್ರೀಕ್ ನ ನಗರ - ಸ್ಪಾರ್ಟ
ಬೌದ್ಧಿಕ ವಿಕಾಸಕ್ಕೆ ಖ್ಯಾತಿ ಪಡೆದ ನಗರ - ಅಥೆನ್ಸ್
ಈ ಶತಮಾನವನ್ನು ಗ್ರೀಕ್ ನ ಸುವರ್ಣಯುಗ ಎಂದು ಕರೆಯಲಾಗಿದೆ - ಕ್ರಿ.ಪೂ.5
ಜಗತ್ತಿನ ರಾಜ್ಯ ರಚನಾ ಇತಾಹಸದಲ್ಲಿ ಅತ್ಯಂತ ಮೇಧಾವಿ ಎಂದು ಖ್ಯಾತಿ ಪಡೆದ ವಿಧ್ವಾಂಸ - ಪೆರಿಕ್ಲಿಸ್
ಪೆರಿಕ್ಲಿಸ್ ನ ತಂದೆ ಹಾಗೂ ತಾಯಿ - ಜಾಂತಿಪಸ್ ಹಾಗೂ ಅಗರಿಸ್ತೆ ( ಅಥೆನ್ಸ್ )
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲ ಜಾರಿಗೆ ತಂದವನು - ಪೆರಿಕ್ಲಿಸ್
ಗ್ರೀಸ್ ನ ಪ್ರಸಿದ್ದ ನಾಟಕಕಾರರು - ಈಸ್ಥಿಲಸ್ , ಸೋಪೋಕ್ಲೀಸ್ ಮತ್ತು ಯೂರಿ ಪಿಡಿಸ್
ಗ್ರೀಕ್ ನ ಪ್ರಸಿದ್ದ ಇತಾಹಸಕಾರು - ಹೆರಡೋಟಸ್ ಮತ್ತು ಥುಸಿಡೈಡ್ಸ್
ಗ್ರೀಕ್ ನ ಪ್ರಸಿದ್ದ ತತ್ವಜ್ಞಾನಿಗಳು - ಸಾಕ್ರೆಟಿಸ್ ಮತ್ತು ಪ್ಲೇಟೋ
ಗ್ರೀಸ್ ನ ವಾಸ್ತುಶಿಲ್ಪದ ವೈಭವವನ್ನು ಎತ್ತಿಹಿಡಿದ ದೇವಾಲಯ - - ಪಾರ್ಥನಾನ್
ಗ್ರೀಕ್ ನ ಪ್ರಸಿದ್ದ ಶಿಲ್ಪಿಗಳು - ಫಿಡಿಯಾ ಮತ್ತು ಮೈರಾನ್
ಅಲೆಗ್ಸಾಂಡರ್ ಹರಡಿದ ಸಂಸ್ಕೃತಿಯ ಯುಗವನ್ನು ಈ ಹೆಸರಿನಿಂದ ಕರೆಯುವರು - ಹೆಲೆನಿಷ್ಟಿಕ್
ಅಲೆಗ್ಸಾಂಡರ್ ನ ದಂಡ ನಾಯಕ - ಟಾಲೆಮಿ
ಗ್ರೀಕ್ ನ ಒಕ್ಕೂಟಗಳು - ಅಥೇನ್ಸ್ ಡಿಲಿಯನ್ ಒಕ್ಕೂಟ ಮತ್ತು ಸ್ಪಾರ್ಟಾದ ಫೆಲೋಫೋನಿಷಿಯನ್ ಒಕ್ಕೂಟ
ಮ್ಯಾಸಿಡೋನಿಯಾ ಸಾಮ್ರಾಜ್ಯ ಉದಯಕ್ಕೆ ಕಾರಣ ಕರ್ತನಾದವನು - ಎರಡನೆ ಫಿಲಿಫ್
ಅಲೆಗ್ಸಾಂಡರ್ ಮ್ಯಾಸಿಡೊನಿಯದಲ್ಲಿ ಅಧಿಕಾರಕ್ಕೆ ಬಂದದ್ದು ಕ್ರಿ.ಪೂ.336
ಅಲೆಗ್ಸಾಂಡರ್ ನ ತಂದೆ - ಎರಡನೇ ಫಿಲಿಫ್
ಪರ್ಶಿಯನ್ನರ ಪವಿತ್ರ ದೇವತೆ - ಅಗ್ನಿ
ಸರ್ಕಾರದ ರಚನೆ
ಪ್ರಜಾಪ್ರಭುತ್ವ ರಚನೆ ಕಾರ್ಯರೂಪದಲ್ಲಿ ಪ್ರಯೋಗ ಮಾಡಿದ ಮೊದಲಿಗರು - ಗ್ರೀಕರು
ಅಲೆಗ್ಸಾಂಡರ್ ಈಜಿಪ್ಟ್ ನಲ್ಲಿ ನಿರ್ಮಿಸಿದ ನಗರ - ಅಲೆಗ್ಸಾಂಡ್ರಿಯಾ
ರಾಜ್ಯಗಳನ್ನು ಒಟ್ಟು ಗೂಡಿಸಿದ ಮೊದಲಿಗರು - ಗ್ರೀಕರು
ತತ್ವಶಾಸ್ತ್ರ
ತತ್ವಶಾಸ್ತ್ರಕ್ಕೆ ಕಾಣಿಕೆಯನ್ನು ಕೊಟ್ಟು ಮೊದಲ ದೇಶ - ಗ್ರೀಕ್
ಸಾಕ್ರಟಿಸ್ ಈ ನಗರ ರಜ್ಯಾದ ತತ್ವಜ್ಞಾನಿ - ಅಥೇನ್ಸ್
ಸಾಕ್ರಟಿಸ್ ನಿಗೆ ಗಲ್ಲು ಶಿಕ್ಷೆಯಾದ ವರ್ಷ ಕ್ರಿ. ಪೂ. 399
ಸಾಕ್ರಟಿಸ್ ನ ಅನನ್ಯ ಶಿಷ್ಯ - ಪ್ಲೇಟೋ
ಅಥೇನ್ಸ್ ನಲ್ಲಿ ವಿಧ್ಯಾಪೀಠವನ್ನು ಸ್ಥಾಪಿಸಿದವನು - ಪ್ಲೇಟೋ
ಪ್ಲೇಟೋನ ಪ್ರಮುಖ ಕೃತಿ - ರಿಪಬ್ಲಿಕ್ , ಸಂಭಾಷನೆ ಮತ್ತು ಅಪಾಲಜಿ
ಆದರ್ಶ ಸಮಾಜದ ರೂಪು ರೇಷೆಗಳ ಕಲ್ಪನೆಯನ್ನು ಹೊಂದಿರುವ ಪ್ಲೇಟೋವಿನ ಕೃತಿ - ರಿಪಬ್ಲಿಕ್
ಅರಿಸ್ಚಾಟಲ್ ನ ತಂದೆಯ ಹೆಸರು - ನಿಕೋಮಾಕಸ್
ಗ್ರೀಕನ ಜ್ಞಾನದ ಪಿತಮಹಾ - ಅರಿಸ್ಟಾಟಲ್
ರಾಜ್ಯಶಾಸ್ತ್ರದ ಪಿತಾಮಹಾ - ಅರಿಸ್ಟಾಟಲ್
ಇವರನ್ನು ಬುದ್ದಿವಂತ ತ್ರಿವಳಿಗಳು ಅಥವಾ ತಾತ್ವಿಕ ತ್ರಯರು ಎಂದು ಕರೆಯವರು - ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಚಾಟಲ್
ಮಾನವ ಸಂಸ್ಥೆಗಳ ವ್ಯವಸ್ಥಿತ ಅಧ್ಯನಕ್ಕೆ ಅಡಿಪಾಯ ಹಾಕಿದವರಲ್ಲಿ ಮೊದಲಿಗರು - ಪ್ಲೇಟೋ
ಪ್ಲೇಟೋರವರ ಹುಟ್ಟೂರು - ಎಜಿನಿ ನಗರ ಕ್ರಿ.ಪೂ.427
ಪ್ಲೇಟೋರವರ ನಿಜವಾದ ಹೆಸರು - ಅರಿಸ್ಟೋಕ್ಲಸ್
ಪ್ಲೇಟೋ ತಮ್ಮ ರಾಜಕೀಯ ಜೀವನವನ್ನು ಮೊದಲಿಗೆ ಆರಂಭಿಸಿ ನಗರ - ಅಥೇನ್ಸ್
ಗ್ರೀಕ್ ನ ಜ್ಞಾನ ಭಂಡಾರದ ಕೇಂದ್ರ - ಅಲೆಗ್ಸಾಂಡ್ರಿಯಾ
ಸಾಕ್ರಟಿಸ್ ಗೆ ಈ ವಿಷವನ್ನು ನೀಡಲಾಯಿತು ಹೆಮ್ ಲಾಕ್
ಪ್ರಜಾಪ್ರಭುತ್ವವನ್ನು ಗುಂಪು ಅಳ್ವಿಕೆ ಎಂದು ಕರೆದವರು - ಪ್ಲೇಟೋ
ಪ್ರಾಚೀನ ಯುಗದ ಪ್ರಪ್ರಥಮ ವಿಶ್ವವಿಧ್ಯಾಲಯ - ಕ್ರಿ.ಪೂ. 386 ರಲ್ಲಿ ಪ್ಲೇಟೋ ಸ್ಥಾಪಿಸಿದ Acadamy ಅಥವಾ ಶಾಲೆ
The republic , The statemen and The Lotus ಕೃತಿಯ ಕರ್ತೃ - ಪ್ಲೇಟೋ
ರಾಜನನ್ನು ರಾಜ್ಯದ ಹಡಗಿನ ನಾವಿಕ ಎಂದು ಕರೆದವರು - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ಆದರ್ಶವಾದಿ ತತ್ವಜ್ಞಾನಿ - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ವಾಸ್ತವವಾದಿ ತತ್ವಜ್ಞಾನಿ - ಅರಿಸ್ಟಾಟಲ್
ಅರಿಸ್ಟಾಟಲ್ ಜನನವಾದದ್ದು - ಕ್ರಿ.ಪೂ. 384 ರಲ್ಲಿ
ಅರಿಸ್ಟಾಟಲ್ ಜನಿಸಿದ ನಗರ - ಸ್ಟಾಗಿರ
ಅರಿಸ್ಟಾಟಲ್ ರವರ ತಂದೆಯ ಹೆಸರು - ನಿಕೋಮ್ಯಾನ್
ಪ್ಲೇಟೋರವರ ನೆಚ್ಚಿನ ಶಿಷ್ಯ - ಅರಿಸ್ಟಾಟಲ್
ಲಾಸಿಯಂ ಎಂಬ ಶಆಲೆಯನ್ನು ಸ್ಥಾಪಿಸಿದವರು - ಅರಿಸ್ಟಾಟಲ್
ನಡೆದಾಡುವ ವಿಶ್ವವಿಧ್ಯಾಲಯ ಎಂದು ಖ್ಯಾತಿ ವೆತ್ತ ತತ್ವಜ್ಞಾನಿ - ಅರಿಸ್ಟಾಟಲ್
Muses ಎಂದರೇ - ಕಲೆ , ಸಾಹಿತ್ಯ ಮತ್ತು ಜ್ಞಾನ ದೇವತೆಗಳು ಎಂದರ್ಥ
ಅರಿಸ್ಟಾಟಲ್ ರವರ ಪ್ರಮುಖ ಕೃತಿ
a. Arganan
b. The history of Animal
c. Meta Physics
d. Nicomokiyan Ethics
e. An Manarki
f. Constitution
g. On Phylosophy
h. The Politics
ರಾಜ್ಯಶಾಸ್ತ್ರ ಅಧ್ಯಯನಕ್ಕೆ ಪರಿಚಯ ಪುಸ್ತಕವಾಗಿರುವ ಅರಿಸ್ಟಾಟಲ್ ರವರ ಮೇರುಕೃತಿ - The Politics
ಪ್ರಾಚೀನ ಗ್ರೀಕ್ ನಲ್ಲಿ 158 ಸಂವಿಧಾನವನ್ನು ಜಾರಿಗೆ ತಂದವರು - ಅರಿಸ್ಟಾಟಲ್
ಅರಿಸ್ಟಾಟಲ್ ರವರು ರಾಜ್ಯಶಾಸ್ತ್ರವನ್ನು ಈ ಹೆಸರಿನಿಂದ ಕರೆದಿದ್ದಾದರೆ - ಅತ್ಯುನ್ನತ ವಿಜ್ಞಾನ ಅಥವಾ ಶ್ರೇಷ್ಠ ವಿಜ್ಞಾನ
ಅರಿಸ್ಟಾಟಲ್ ರವರನ್ನು ನೋಯಸ್ ಎಂದು ಕರೆದವರು - ಪ್ಲೇಟೋ
ನೋಯಾಸ್ ಎಂದರೇ - ಬುದ್ದಿವಂತಿಕೆಯ ಪ್ರತಿ ರೂಪ
ಸಾಹಿತ್ಯ
ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳು - ಇಲಿಯಡ್ ಮತ್ತು ಒಡಿಸ್ಸಿ
ಇಲಿಯಡ್ ಮತ್ತು ಒಡಿಸ್ಸಿ ಕೃತಿಯ ಕರ್ತೃ - ಹೋಮರ್
ಭಾವಗಿತೆಯಲ್ಲಿ ಓಡ್ ಶೈಲಿಯನ್ನು ಬಳಸಿದ ಗ್ರೀಕ್ ಕವಿ - ಪಿಂದಾರ
ಗ್ರೀಕ್ ಸಾಮ್ರಾಜ್ಯದ ಪ್ರಸಿದ್ದ ಕವಯಿತ್ರಿ - ಸಪ್ರೂ
ಗ್ರೀಕ್ ನ ದುರಂತ ನಾಟಕ ತ್ರಯರು - - ಈಸ್ಕಲಸ್ , ಯೂರಿಪಿಡಿಸ್ ಹಾಗೂ ಸೋಪೋಕ್ಲಿಸ್
ನಾಟಕಗಳ ತವರು ಮನೆ - ಗ್ರೀಕ್
ಗ್ರೀಕ್ ನಾಟಕದ ಬಯಲು ರಂಗಮಂದಿರದ ್ವಶೇಷಗಳು ಈ ಪ್ರದೇಶದಲ್ಲಿ ದೊರೆತಿದೆ - ಈ ಪಿಡನಸ್ ಮತ್ತು ಆಗೋವಲಸ್
ಇತಿಹಾಸದ ಪಿತಮಹಾ - ಹೆರೋಡೋಟಸ್
The parshiyan war ಕೃತಿಯ ಕರ್ತೃ - ಹೆರೋಡೋಟಸ್
ಇತಿಹಾಸ ಲೇಖನ ಕಲೆಯ ತವರು ಮನೆ - ಗ್ರೀಕ್
ಹೆರೋಡೋಟಸ್ ಈತನ ಆಸ್ಥಾನದಲ್ಲಿದ್ದನು - ಪೆರಿಕ್ಲಿಸ್
Peloponician war ಕೃತಿಯ ಕರ್ತೃ - ಥುಸಿಡೈಡ್ಸ್
Peloponician war ಕೃತಿಯ ಈ ಅಂಶಗಳನ್ನು ಒಳಗೊಂಡಿದೆ - ಸ್ಪಾರ್ಟಾ ಮತ್ತು ಅಥೇನ್ಸ್ ಒಕ್ಕೂಟದ ನಡುವಿನ ಘರ್ಷಣಿ
ಗ್ರೀಕರು ಬೆಳೆಸಿಕೊಂಡಿದ್ದ ಅತ್ಯುನ್ನತ ಪ್ರತಿಭೆ - ವಾಗ್ಮಿತ್ವ ( Oratory )
ಗ್ರೀಕ್ ನ ಪ್ರಸಿದ್ದ ವಾಗ್ಮಿ - ಡೆಮೋಸ್ಥನಿಸ್
ಪಾರ್ಸಿಗಳ ತಾಯಿನಾಡು - ಪರ್ಶಿಯಾ
ಕಲೆ ಮತ್ತು ವಾಸ್ತುಶಿಲ್ಪ
ಗ್ರೀಕ್ ದೇವಾಲಯಗಳು ಈ ಆಕರಾವನ್ನು ಹೊಂದಿದೆ - ಚತುರ್ಭಜಾಕರ
ಗ್ರೀಕ್ ನ ಕಲೆ ಮತ್ತು ವಾಸ್ತು ಶಿಲ್ಪದ ಪ್ರತೀಕ ದೇವಾಲಯ - ಅಥೇನ್ಸಿನ ಪಾರ್ಥನಾನ್ ದೇವಾಲಯ
ಗ್ರೀಕರ ಪ್ರಸಿದ್ ದೇವತೆಯ ಹೆಸರು - ಅಥೆನಾ ದೇವತೆ
ಗ್ರೀಕ್ ನ ಮಹಾ ಶಿಲ್ಪಿ ಹಾಗೂ ಚಿತ್ರ ರಚನೆಗಾರ - ಪಿಡಿಯಾಸ್
ಅಥೆನಾ ದೇವತೆಯ ಪ್ರಸಿದ್ದ ವಿಗ್ರಹವನ್ನು ರೂಪಿಸಿದವರು - ಪಿಡಿಯಾಸ್
ಕೊಳಲನ್ನು ಜಗತ್ತಿನ ಸಂಗೀತ ಕ್ಷೇತ್ರಕ್ಕೆ ನೀಡಿದವರು - ಗ್ರೀಕರು
ಭಾವಗೀತೆಯನ್ನು ಬರೆಯುವ ಕಲೆಯು ಮೊದಲು ಆರಂಭಗೊಂಡಿದ್ದು - ಗ್ರೀಕ್ ನಲ್ಲಿ
ಒಲಿಂಪಿಕ್ ಕ್ರೀಡೆಗಳನ್ನು ಆರಂಭ ಮೊಡಿದವರು - ಗ್ರೀಕರು
ಮೊದಲ ಒಲಿಂಪಿಕ್ ನಡೆದ ವರ್ಷ - ಕ್ರಿ.ಪೂ.496
ವೈದ್ಯ ವಿಜ್ಞಾನದ ಪಿತಾಮಹಾ - ಹಿಪೋಕ್ರೇಟ್ಸ್
ಹಿಪೋಕ್ರೇಟ್ಸ್ ಈ ದೇಶದವನು - ಗ್ರೀಕ್
ಪ್ರಕೃತಿ ವಿಜ್ಞಾನವನ್ನು ಬೆಳೆಸಿವನು - ಥಿಯೋಪ್ರಾಸ್ಟರ್
ಗ್ರೀಕ್ ನ ಪ್ರಸಿದ್ದ ಗಣಿತಜ್ಞರು - ಯೂಕ್ಲಿಡ್ , ಪೈಥಾಗೊರಸ್ ಮತ್ತು ಆರ್ಕಿಮಿಡ್ಸ್
ಸಾಪೇಕ್ಷ ಸಿದ್ದಾಂತದ ನಿರೂಪಕ - ಆರ್ಕಿಮಿಡಿಸ್
ಪ್ರಪಂಚದ ಭೂಪಟವನ್ನು ಭೂಮಧ್ಯೆ ರೇಖೆಯ ವ್ಯಾಸಕ್ಕನುಗುಣವಾಗಿ ಕ್ರಮಬದ್ದಗೊಳಿಸಿದವನು - ಎರಟೋಥೇನ್ಸ್
ಸೌರಮಂಡಲದ ಸ್ವರೂಪದ ಬಗ್ಗೆ ಸಿದ್ಧಾಂತವನ್ನು ಮಂಡಿಸಿದವನು - ಅರಿಸ್ಟಾಕಸ್
ಪೈಥಾಗೊರಸ್ ಜನಿಸಿದ ಸ್ಥಳ - ಸಾಮೋಸ್ ದ್ವೀಪ
Extra Tips
ಗ್ರೀಕರ ಪ್ರಮುಖ ವೃತ್ತಿ - ವಾಣಿಜ್ಯ
ಗ್ರೀಕರ ಪ್ರಮುಖ ನಿರ್ಮಾಣ ವಸ್ತುಗಳು - ಪಿಂಗಾಣಿ ಪಾತ್ರೆ , ದ್ರಾಕ್ಷಾ ಮಧ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದ ಗ್ರೀಕ್ ನ ನಗರ ರಾಜ್ಯ - ಸ್ಪಾರ್ಟ
ಒಲಿಂಪಿಕ್ ಆಟಗಳನ್ನು ಗ್ರೀಕರು ಮ1ದಲು ಆರಂಭಿಸಿದ್ದು - ಕ್ರಿ,ಪೂ.776
ಗ್ರೀಕರು ದೇವಾಲಯಗಳ ನಿರ್ಮಾಣದಲ್ಲಿ ಬಳಸಿದ ಶೈಲಿ - ಡೋರಿಕ್ , ಅಯೋನಿಕ್ ಹಾಗೂ ಕಾರಿಂತಿಯನ್ ಶಾಲಿ
ಈತನ ಕಾಲವನ್ನು ಅಥೇನ್ಸ್ ನಗರ ರಾಜ್ಯದ ಶ್ರೇಷ್ಠ ಕಾಲ ಎಂದು ಕರೆಯಲಾಗಿದೆ - ಪೆರಿಕ್ಲಿಸ್
ಗ್ರೀಕರ ಪ್ರಸಿದ್ದ ನಾಟಕ ದೇವತೆ - ಡಯೋನಿಶಿಯಸ್
ಗ್ರೀಕರು ನಾಟಕವಾಡುತ್ತಿದ್ದ ರಂಗ ಮಂದಿರದ ಹೆಸರು - ಅಪೆರಾ
ಗ್ರೀಕರು ದೈವಗಳ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುವರು - ಜ್ಯೂಸ್
ಜ್ಯೂಸ್ ನ ರಾಣಿಯ ಹೆಸರು - ಹಿರಾ
ಗ್ರೀಕರ ಜ್ಞಾನ ದೇವತೆ - ಅಥಿನಿ
ಗ್ರೀಕರ ಸೂರ್ಯ ದೇವನ ಹೆಸರು - ಒಲಿಂಪಸ್
ಒಲಿಂಪಸ್ ಹೆಸರಿನಲ್ಲಿ ಆರಂಭ ಗೊಂಡ ಆಟ - ಒಲಿಂಪಿಕ್
ಆಧುನಿಕ ಯಾರೋಪ್ ಪ್ರಾಚೀನ ಗ್ರೀಸ್ ನ ಕೂಸು ಎಂದವರು - ಜವಹರಲಾಲ್ ನೆಹರು
ಪರ್ಶಿಯಾದ ಪ್ರಬಲ ದೊರೆ - ಡೇರಿಯಾಸ್
ಡೇರಿಯಸ್ ನ ಮಗನ ಹೊಸರು - ಕ್ರರಕ್ರಸ್
ಗ್ರೀಕ್ ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡೆಗಳ ನಡೆಯುತ್ತಿದ್ದ ಪ್ರದೇಶ - Mount Olompus
ಗ್ರೀಕರು ಈ ಪಂಗಡಕ್ಕೆ ಸೇರಿದವರು - ಇಂಡೋ - ಯೋರೋಪಿಯನ್
ಗ್ರೀಕರು ಈ ನದಿಯ ದಂಡೆಯ ಮೇಲೆ ಬಂದು ನೆಲೆಸಿದರು - ಡ್ಯಾನ್ಯೂಬ್
ನಗರ ರಾಜ್ಯಗಳ ಕಲ್ಪನೆಯನ್ನು ಮೊದಲು ತಂದವರು - ಗ್ರೀಕರು
ಗ್ರೀಕ್ ನ ಪ್ರಮುಖ ನಗರ ರಾಜ್ಯಗಳು - ಅಥೇನ್ಸ್ , ಸ್ಪಾರ್ಟಾ , ಹಾಗೂ ಕೊರಿಂಥ್
ಸೈನಿಕ ಶಕ್ತಿಗೆ ಹೆಸರಾದ ಗ್ರೀಕ್ ನ ನಗರ - ಸ್ಪಾರ್ಟ
ಬೌದ್ಧಿಕ ವಿಕಾಸಕ್ಕೆ ಖ್ಯಾತಿ ಪಡೆದ ನಗರ - ಅಥೆನ್ಸ್
ಈ ಶತಮಾನವನ್ನು ಗ್ರೀಕ್ ನ ಸುವರ್ಣಯುಗ ಎಂದು ಕರೆಯಲಾಗಿದೆ - ಕ್ರಿ.ಪೂ.5
ಜಗತ್ತಿನ ರಾಜ್ಯ ರಚನಾ ಇತಾಹಸದಲ್ಲಿ ಅತ್ಯಂತ ಮೇಧಾವಿ ಎಂದು ಖ್ಯಾತಿ ಪಡೆದ ವಿಧ್ವಾಂಸ - ಪೆರಿಕ್ಲಿಸ್
ಪೆರಿಕ್ಲಿಸ್ ನ ತಂದೆ ಹಾಗೂ ತಾಯಿ - ಜಾಂತಿಪಸ್ ಹಾಗೂ ಅಗರಿಸ್ತೆ ( ಅಥೆನ್ಸ್ )
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲ ಜಾರಿಗೆ ತಂದವನು - ಪೆರಿಕ್ಲಿಸ್
ಗ್ರೀಸ್ ನ ಪ್ರಸಿದ್ದ ನಾಟಕಕಾರರು - ಈಸ್ಥಿಲಸ್ , ಸೋಪೋಕ್ಲೀಸ್ ಮತ್ತು ಯೂರಿ ಪಿಡಿಸ್
ಗ್ರೀಕ್ ನ ಪ್ರಸಿದ್ದ ಇತಾಹಸಕಾರು - ಹೆರಡೋಟಸ್ ಮತ್ತು ಥುಸಿಡೈಡ್ಸ್
ಗ್ರೀಕ್ ನ ಪ್ರಸಿದ್ದ ತತ್ವಜ್ಞಾನಿಗಳು - ಸಾಕ್ರೆಟಿಸ್ ಮತ್ತು ಪ್ಲೇಟೋ
ಗ್ರೀಸ್ ನ ವಾಸ್ತುಶಿಲ್ಪದ ವೈಭವವನ್ನು ಎತ್ತಿಹಿಡಿದ ದೇವಾಲಯ - - ಪಾರ್ಥನಾನ್
ಗ್ರೀಕ್ ನ ಪ್ರಸಿದ್ದ ಶಿಲ್ಪಿಗಳು - ಫಿಡಿಯಾ ಮತ್ತು ಮೈರಾನ್
ಅಲೆಗ್ಸಾಂಡರ್ ಹರಡಿದ ಸಂಸ್ಕೃತಿಯ ಯುಗವನ್ನು ಈ ಹೆಸರಿನಿಂದ ಕರೆಯುವರು - ಹೆಲೆನಿಷ್ಟಿಕ್
ಅಲೆಗ್ಸಾಂಡರ್ ನ ದಂಡ ನಾಯಕ - ಟಾಲೆಮಿ
ಗ್ರೀಕ್ ನ ಒಕ್ಕೂಟಗಳು - ಅಥೇನ್ಸ್ ಡಿಲಿಯನ್ ಒಕ್ಕೂಟ ಮತ್ತು ಸ್ಪಾರ್ಟಾದ ಫೆಲೋಫೋನಿಷಿಯನ್ ಒಕ್ಕೂಟ
ಮ್ಯಾಸಿಡೋನಿಯಾ ಸಾಮ್ರಾಜ್ಯ ಉದಯಕ್ಕೆ ಕಾರಣ ಕರ್ತನಾದವನು - ಎರಡನೆ ಫಿಲಿಫ್
ಅಲೆಗ್ಸಾಂಡರ್ ಮ್ಯಾಸಿಡೊನಿಯದಲ್ಲಿ ಅಧಿಕಾರಕ್ಕೆ ಬಂದದ್ದು ಕ್ರಿ.ಪೂ.336
ಅಲೆಗ್ಸಾಂಡರ್ ನ ತಂದೆ - ಎರಡನೇ ಫಿಲಿಫ್
ಪರ್ಶಿಯನ್ನರ ಪವಿತ್ರ ದೇವತೆ - ಅಗ್ನಿ
ಸರ್ಕಾರದ ರಚನೆ
ಪ್ರಜಾಪ್ರಭುತ್ವ ರಚನೆ ಕಾರ್ಯರೂಪದಲ್ಲಿ ಪ್ರಯೋಗ ಮಾಡಿದ ಮೊದಲಿಗರು - ಗ್ರೀಕರು
ಅಲೆಗ್ಸಾಂಡರ್ ಈಜಿಪ್ಟ್ ನಲ್ಲಿ ನಿರ್ಮಿಸಿದ ನಗರ - ಅಲೆಗ್ಸಾಂಡ್ರಿಯಾ
ರಾಜ್ಯಗಳನ್ನು ಒಟ್ಟು ಗೂಡಿಸಿದ ಮೊದಲಿಗರು - ಗ್ರೀಕರು
ತತ್ವಶಾಸ್ತ್ರ
ತತ್ವಶಾಸ್ತ್ರಕ್ಕೆ ಕಾಣಿಕೆಯನ್ನು ಕೊಟ್ಟು ಮೊದಲ ದೇಶ - ಗ್ರೀಕ್
ಸಾಕ್ರಟಿಸ್ ಈ ನಗರ ರಜ್ಯಾದ ತತ್ವಜ್ಞಾನಿ - ಅಥೇನ್ಸ್
ಸಾಕ್ರಟಿಸ್ ನಿಗೆ ಗಲ್ಲು ಶಿಕ್ಷೆಯಾದ ವರ್ಷ ಕ್ರಿ. ಪೂ. 399
ಸಾಕ್ರಟಿಸ್ ನ ಅನನ್ಯ ಶಿಷ್ಯ - ಪ್ಲೇಟೋ
ಅಥೇನ್ಸ್ ನಲ್ಲಿ ವಿಧ್ಯಾಪೀಠವನ್ನು ಸ್ಥಾಪಿಸಿದವನು - ಪ್ಲೇಟೋ
ಪ್ಲೇಟೋನ ಪ್ರಮುಖ ಕೃತಿ - ರಿಪಬ್ಲಿಕ್ , ಸಂಭಾಷನೆ ಮತ್ತು ಅಪಾಲಜಿ
ಆದರ್ಶ ಸಮಾಜದ ರೂಪು ರೇಷೆಗಳ ಕಲ್ಪನೆಯನ್ನು ಹೊಂದಿರುವ ಪ್ಲೇಟೋವಿನ ಕೃತಿ - ರಿಪಬ್ಲಿಕ್
ಅರಿಸ್ಚಾಟಲ್ ನ ತಂದೆಯ ಹೆಸರು - ನಿಕೋಮಾಕಸ್
ಗ್ರೀಕನ ಜ್ಞಾನದ ಪಿತಮಹಾ - ಅರಿಸ್ಟಾಟಲ್
ರಾಜ್ಯಶಾಸ್ತ್ರದ ಪಿತಾಮಹಾ - ಅರಿಸ್ಟಾಟಲ್
ಇವರನ್ನು ಬುದ್ದಿವಂತ ತ್ರಿವಳಿಗಳು ಅಥವಾ ತಾತ್ವಿಕ ತ್ರಯರು ಎಂದು ಕರೆಯವರು - ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಚಾಟಲ್
ಮಾನವ ಸಂಸ್ಥೆಗಳ ವ್ಯವಸ್ಥಿತ ಅಧ್ಯನಕ್ಕೆ ಅಡಿಪಾಯ ಹಾಕಿದವರಲ್ಲಿ ಮೊದಲಿಗರು - ಪ್ಲೇಟೋ
ಪ್ಲೇಟೋರವರ ಹುಟ್ಟೂರು - ಎಜಿನಿ ನಗರ ಕ್ರಿ.ಪೂ.427
ಪ್ಲೇಟೋರವರ ನಿಜವಾದ ಹೆಸರು - ಅರಿಸ್ಟೋಕ್ಲಸ್
ಪ್ಲೇಟೋ ತಮ್ಮ ರಾಜಕೀಯ ಜೀವನವನ್ನು ಮೊದಲಿಗೆ ಆರಂಭಿಸಿ ನಗರ - ಅಥೇನ್ಸ್
ಗ್ರೀಕ್ ನ ಜ್ಞಾನ ಭಂಡಾರದ ಕೇಂದ್ರ - ಅಲೆಗ್ಸಾಂಡ್ರಿಯಾ
ಸಾಕ್ರಟಿಸ್ ಗೆ ಈ ವಿಷವನ್ನು ನೀಡಲಾಯಿತು ಹೆಮ್ ಲಾಕ್
ಪ್ರಜಾಪ್ರಭುತ್ವವನ್ನು ಗುಂಪು ಅಳ್ವಿಕೆ ಎಂದು ಕರೆದವರು - ಪ್ಲೇಟೋ
ಪ್ರಾಚೀನ ಯುಗದ ಪ್ರಪ್ರಥಮ ವಿಶ್ವವಿಧ್ಯಾಲಯ - ಕ್ರಿ.ಪೂ. 386 ರಲ್ಲಿ ಪ್ಲೇಟೋ ಸ್ಥಾಪಿಸಿದ Acadamy ಅಥವಾ ಶಾಲೆ
The republic , The statemen and The Lotus ಕೃತಿಯ ಕರ್ತೃ - ಪ್ಲೇಟೋ
ರಾಜನನ್ನು ರಾಜ್ಯದ ಹಡಗಿನ ನಾವಿಕ ಎಂದು ಕರೆದವರು - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ಆದರ್ಶವಾದಿ ತತ್ವಜ್ಞಾನಿ - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ವಾಸ್ತವವಾದಿ ತತ್ವಜ್ಞಾನಿ - ಅರಿಸ್ಟಾಟಲ್
ಅರಿಸ್ಟಾಟಲ್ ಜನನವಾದದ್ದು - ಕ್ರಿ.ಪೂ. 384 ರಲ್ಲಿ
ಅರಿಸ್ಟಾಟಲ್ ಜನಿಸಿದ ನಗರ - ಸ್ಟಾಗಿರ
ಅರಿಸ್ಟಾಟಲ್ ರವರ ತಂದೆಯ ಹೆಸರು - ನಿಕೋಮ್ಯಾನ್
ಪ್ಲೇಟೋರವರ ನೆಚ್ಚಿನ ಶಿಷ್ಯ - ಅರಿಸ್ಟಾಟಲ್
ಲಾಸಿಯಂ ಎಂಬ ಶಆಲೆಯನ್ನು ಸ್ಥಾಪಿಸಿದವರು - ಅರಿಸ್ಟಾಟಲ್
ನಡೆದಾಡುವ ವಿಶ್ವವಿಧ್ಯಾಲಯ ಎಂದು ಖ್ಯಾತಿ ವೆತ್ತ ತತ್ವಜ್ಞಾನಿ - ಅರಿಸ್ಟಾಟಲ್
Muses ಎಂದರೇ - ಕಲೆ , ಸಾಹಿತ್ಯ ಮತ್ತು ಜ್ಞಾನ ದೇವತೆಗಳು ಎಂದರ್ಥ
ಅರಿಸ್ಟಾಟಲ್ ರವರ ಪ್ರಮುಖ ಕೃತಿ
a. Arganan
b. The history of Animal
c. Meta Physics
d. Nicomokiyan Ethics
e. An Manarki
f. Constitution
g. On Phylosophy
h. The Politics
ರಾಜ್ಯಶಾಸ್ತ್ರ ಅಧ್ಯಯನಕ್ಕೆ ಪರಿಚಯ ಪುಸ್ತಕವಾಗಿರುವ ಅರಿಸ್ಟಾಟಲ್ ರವರ ಮೇರುಕೃತಿ - The Politics
ಪ್ರಾಚೀನ ಗ್ರೀಕ್ ನಲ್ಲಿ 158 ಸಂವಿಧಾನವನ್ನು ಜಾರಿಗೆ ತಂದವರು - ಅರಿಸ್ಟಾಟಲ್
ಅರಿಸ್ಟಾಟಲ್ ರವರು ರಾಜ್ಯಶಾಸ್ತ್ರವನ್ನು ಈ ಹೆಸರಿನಿಂದ ಕರೆದಿದ್ದಾದರೆ - ಅತ್ಯುನ್ನತ ವಿಜ್ಞಾನ ಅಥವಾ ಶ್ರೇಷ್ಠ ವಿಜ್ಞಾನ
ಅರಿಸ್ಟಾಟಲ್ ರವರನ್ನು ನೋಯಸ್ ಎಂದು ಕರೆದವರು - ಪ್ಲೇಟೋ
ನೋಯಾಸ್ ಎಂದರೇ - ಬುದ್ದಿವಂತಿಕೆಯ ಪ್ರತಿ ರೂಪ
ಸಾಹಿತ್ಯ
ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳು - ಇಲಿಯಡ್ ಮತ್ತು ಒಡಿಸ್ಸಿ
ಇಲಿಯಡ್ ಮತ್ತು ಒಡಿಸ್ಸಿ ಕೃತಿಯ ಕರ್ತೃ - ಹೋಮರ್
ಭಾವಗಿತೆಯಲ್ಲಿ ಓಡ್ ಶೈಲಿಯನ್ನು ಬಳಸಿದ ಗ್ರೀಕ್ ಕವಿ - ಪಿಂದಾರ
ಗ್ರೀಕ್ ಸಾಮ್ರಾಜ್ಯದ ಪ್ರಸಿದ್ದ ಕವಯಿತ್ರಿ - ಸಪ್ರೂ
ಗ್ರೀಕ್ ನ ದುರಂತ ನಾಟಕ ತ್ರಯರು - - ಈಸ್ಕಲಸ್ , ಯೂರಿಪಿಡಿಸ್ ಹಾಗೂ ಸೋಪೋಕ್ಲಿಸ್
ನಾಟಕಗಳ ತವರು ಮನೆ - ಗ್ರೀಕ್
ಗ್ರೀಕ್ ನಾಟಕದ ಬಯಲು ರಂಗಮಂದಿರದ ್ವಶೇಷಗಳು ಈ ಪ್ರದೇಶದಲ್ಲಿ ದೊರೆತಿದೆ - ಈ ಪಿಡನಸ್ ಮತ್ತು ಆಗೋವಲಸ್
ಇತಿಹಾಸದ ಪಿತಮಹಾ - ಹೆರೋಡೋಟಸ್
The parshiyan war ಕೃತಿಯ ಕರ್ತೃ - ಹೆರೋಡೋಟಸ್
ಇತಿಹಾಸ ಲೇಖನ ಕಲೆಯ ತವರು ಮನೆ - ಗ್ರೀಕ್
ಹೆರೋಡೋಟಸ್ ಈತನ ಆಸ್ಥಾನದಲ್ಲಿದ್ದನು - ಪೆರಿಕ್ಲಿಸ್
Peloponician war ಕೃತಿಯ ಕರ್ತೃ - ಥುಸಿಡೈಡ್ಸ್
Peloponician war ಕೃತಿಯ ಈ ಅಂಶಗಳನ್ನು ಒಳಗೊಂಡಿದೆ - ಸ್ಪಾರ್ಟಾ ಮತ್ತು ಅಥೇನ್ಸ್ ಒಕ್ಕೂಟದ ನಡುವಿನ ಘರ್ಷಣಿ
ಗ್ರೀಕರು ಬೆಳೆಸಿಕೊಂಡಿದ್ದ ಅತ್ಯುನ್ನತ ಪ್ರತಿಭೆ - ವಾಗ್ಮಿತ್ವ ( Oratory )
ಗ್ರೀಕ್ ನ ಪ್ರಸಿದ್ದ ವಾಗ್ಮಿ - ಡೆಮೋಸ್ಥನಿಸ್
ಪಾರ್ಸಿಗಳ ತಾಯಿನಾಡು - ಪರ್ಶಿಯಾ
ಕಲೆ ಮತ್ತು ವಾಸ್ತುಶಿಲ್ಪ
ಗ್ರೀಕ್ ದೇವಾಲಯಗಳು ಈ ಆಕರಾವನ್ನು ಹೊಂದಿದೆ - ಚತುರ್ಭಜಾಕರ
ಗ್ರೀಕ್ ನ ಕಲೆ ಮತ್ತು ವಾಸ್ತು ಶಿಲ್ಪದ ಪ್ರತೀಕ ದೇವಾಲಯ - ಅಥೇನ್ಸಿನ ಪಾರ್ಥನಾನ್ ದೇವಾಲಯ
ಗ್ರೀಕರ ಪ್ರಸಿದ್ ದೇವತೆಯ ಹೆಸರು - ಅಥೆನಾ ದೇವತೆ
ಗ್ರೀಕ್ ನ ಮಹಾ ಶಿಲ್ಪಿ ಹಾಗೂ ಚಿತ್ರ ರಚನೆಗಾರ - ಪಿಡಿಯಾಸ್
ಅಥೆನಾ ದೇವತೆಯ ಪ್ರಸಿದ್ದ ವಿಗ್ರಹವನ್ನು ರೂಪಿಸಿದವರು - ಪಿಡಿಯಾಸ್
ಕೊಳಲನ್ನು ಜಗತ್ತಿನ ಸಂಗೀತ ಕ್ಷೇತ್ರಕ್ಕೆ ನೀಡಿದವರು - ಗ್ರೀಕರು
ಭಾವಗೀತೆಯನ್ನು ಬರೆಯುವ ಕಲೆಯು ಮೊದಲು ಆರಂಭಗೊಂಡಿದ್ದು - ಗ್ರೀಕ್ ನಲ್ಲಿ
ಒಲಿಂಪಿಕ್ ಕ್ರೀಡೆಗಳನ್ನು ಆರಂಭ ಮೊಡಿದವರು - ಗ್ರೀಕರು
ಮೊದಲ ಒಲಿಂಪಿಕ್ ನಡೆದ ವರ್ಷ - ಕ್ರಿ.ಪೂ.496
ವೈದ್ಯ ವಿಜ್ಞಾನದ ಪಿತಾಮಹಾ - ಹಿಪೋಕ್ರೇಟ್ಸ್
ಹಿಪೋಕ್ರೇಟ್ಸ್ ಈ ದೇಶದವನು - ಗ್ರೀಕ್
ಪ್ರಕೃತಿ ವಿಜ್ಞಾನವನ್ನು ಬೆಳೆಸಿವನು - ಥಿಯೋಪ್ರಾಸ್ಟರ್
ಗ್ರೀಕ್ ನ ಪ್ರಸಿದ್ದ ಗಣಿತಜ್ಞರು - ಯೂಕ್ಲಿಡ್ , ಪೈಥಾಗೊರಸ್ ಮತ್ತು ಆರ್ಕಿಮಿಡ್ಸ್
ಸಾಪೇಕ್ಷ ಸಿದ್ದಾಂತದ ನಿರೂಪಕ - ಆರ್ಕಿಮಿಡಿಸ್
ಪ್ರಪಂಚದ ಭೂಪಟವನ್ನು ಭೂಮಧ್ಯೆ ರೇಖೆಯ ವ್ಯಾಸಕ್ಕನುಗುಣವಾಗಿ ಕ್ರಮಬದ್ದಗೊಳಿಸಿದವನು - ಎರಟೋಥೇನ್ಸ್
ಸೌರಮಂಡಲದ ಸ್ವರೂಪದ ಬಗ್ಗೆ ಸಿದ್ಧಾಂತವನ್ನು ಮಂಡಿಸಿದವನು - ಅರಿಸ್ಟಾಕಸ್
ಪೈಥಾಗೊರಸ್ ಜನಿಸಿದ ಸ್ಥಳ - ಸಾಮೋಸ್ ದ್ವೀಪ
Extra Tips
ಗ್ರೀಕರ ಪ್ರಮುಖ ವೃತ್ತಿ - ವಾಣಿಜ್ಯ
ಗ್ರೀಕರ ಪ್ರಮುಖ ನಿರ್ಮಾಣ ವಸ್ತುಗಳು - ಪಿಂಗಾಣಿ ಪಾತ್ರೆ , ದ್ರಾಕ್ಷಾ ಮಧ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದ ಗ್ರೀಕ್ ನ ನಗರ ರಾಜ್ಯ - ಸ್ಪಾರ್ಟ
ಒಲಿಂಪಿಕ್ ಆಟಗಳನ್ನು ಗ್ರೀಕರು ಮ1ದಲು ಆರಂಭಿಸಿದ್ದು - ಕ್ರಿ,ಪೂ.776
ಗ್ರೀಕರು ದೇವಾಲಯಗಳ ನಿರ್ಮಾಣದಲ್ಲಿ ಬಳಸಿದ ಶೈಲಿ - ಡೋರಿಕ್ , ಅಯೋನಿಕ್ ಹಾಗೂ ಕಾರಿಂತಿಯನ್ ಶಾಲಿ
ಈತನ ಕಾಲವನ್ನು ಅಥೇನ್ಸ್ ನಗರ ರಾಜ್ಯದ ಶ್ರೇಷ್ಠ ಕಾಲ ಎಂದು ಕರೆಯಲಾಗಿದೆ - ಪೆರಿಕ್ಲಿಸ್
ಗ್ರೀಕರ ಪ್ರಸಿದ್ದ ನಾಟಕ ದೇವತೆ - ಡಯೋನಿಶಿಯಸ್
ಗ್ರೀಕರು ನಾಟಕವಾಡುತ್ತಿದ್ದ ರಂಗ ಮಂದಿರದ ಹೆಸರು - ಅಪೆರಾ
ಗ್ರೀಕರು ದೈವಗಳ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುವರು - ಜ್ಯೂಸ್
ಜ್ಯೂಸ್ ನ ರಾಣಿಯ ಹೆಸರು - ಹಿರಾ
ಗ್ರೀಕರ ಜ್ಞಾನ ದೇವತೆ - ಅಥಿನಿ
ಗ್ರೀಕರ ಸೂರ್ಯ ದೇವನ ಹೆಸರು - ಒಲಿಂಪಸ್
ಒಲಿಂಪಸ್ ಹೆಸರಿನಲ್ಲಿ ಆರಂಭ ಗೊಂಡ ಆಟ - ಒಲಿಂಪಿಕ್
ಆಧುನಿಕ ಯಾರೋಪ್ ಪ್ರಾಚೀನ ಗ್ರೀಸ್ ನ ಕೂಸು ಎಂದವರು - ಜವಹರಲಾಲ್ ನೆಹರು
ಪರ್ಶಿಯಾದ ಪ್ರಬಲ ದೊರೆ - ಡೇರಿಯಾಸ್
ಡೇರಿಯಸ್ ನ ಮಗನ ಹೊಸರು - ಕ್ರರಕ್ರಸ್
ಗ್ರೀಕ್ ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡೆಗಳ ನಡೆಯುತ್ತಿದ್ದ ಪ್ರದೇಶ - Mount Olompus
Rangadhamaiah thoremane
ಸರ್ವರೋಗ ಪರಿಹಾರಕ: ವೈದ್ಯನಾಥ ಸ್ವಾಮಿ
![]() | ||
|
ಕುಜ ದೋಷಕ್ಕೆ, ವಿವಾಹ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ತೊಂದರೆಗಳಿಗೆ ಇದು ಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಮುರುಗ (ಷಣ್ಮುಖ)ನು ಪುತ್ರ ಭಾಗ್ಯ ಕರುಣಿಸುತ್ತಾನೆ. ತಯ್ಯಲ್ನಾಯಕಿ ಅಮ್ಮ ಸುಮಂಗಲಿಯರ ಔನ್ನತ್ಯಕ್ಕೆ ಕಾರಕಳಾಗಿರುತ್ತಾಳೆ.
ಈ ಕ್ಷೇತ್ರದಲ್ಲಿ ಒಂದೇ ಸಾಲಿನಲ್ಲಿ ಎಲ್ಲಾ ನವಗ್ರಹರೂ ನಿಂತಿರುವಂತಹ ವಿಗ್ರಹಗಳಿವೆ. ಆದುದರಿಂದ ಸರ್ವ ಗ್ರಹ ದೋಷವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ.
ಬಿಲ್ವ, ಶ್ರೀಗಂಧ ಮತ್ತು ವಿಭೂತಿಯ ಮಿಶ್ರಣದ ಮೂಲಕ ದೇವರು ಎಲ್ಲ ರೋಗಗಳನ್ನೂ ಪರಿಹರಿಸುತ್ತಾನೆ. ಈ ಸ್ಥಳದಲ್ಲಿ ಎಲ್ಲಾ ನಾಲ್ಕು ಯುಗಗಳಲ್ಲಿ ಬೇರೆ ಬೇರೆಯೇ ವೃಕ್ಷಗಳಿದ್ದವು ಎಂಬ ನಂಬಿಕೆ ಇದೆ. ಅಂದರೆ ಕೃತ ಯುಗದಲ್ಲಿ ಕದಂಬ ವೃಕ್ಷ, ತ್ರೇತಾ ಯುಗದಲ್ಲಿ ಬಿಲ್ವ ವೃಕ್ಷ, ದ್ವಾಪರ ಯುಗದಲ್ಲಿ ಬಕುಳ ವೃಕ್ಷ ಹಾಗೂ ಕಲಿಯುಗದಲ್ಲಿ ಬೇವು ವೃಕ್ಷ ಇಲ್ಲಿದೆ.
ಇಲ್ಲಿನ ಸಿದ್ಧಾಮೃತ ಕೊಳವು ಆಕರ್ಷಕವಾಗಿದೆ. ಕೃತಯುಗದಲ್ಲಿ ಕಾಮಧೇನುವು ಇಲ್ಲಿಗೆ ಬಂದು ಶಿವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದ್ದು, ಉಕ್ಕಿ ಹರಿದ ಹಾಲು ಕೊಳವನ್ನು ತುಂಬಿತು, ಈ ಮೂಲಕ ಕೊಳಕ್ಕೆ ದೈವೀಕ ಶಕ್ತಿ ನೀಡಿತು ಎಂಬ ನಂಬಿಕೆಯಿದೆ. ದುಷ್ಟಶಕ್ತಿಗಳ ಬಾಧೆಗೀಡಾದ ವ್ಯಕ್ತಿಗಳು ಈ ಪವಿತ್ರ ಕೊಳದಲ್ಲಿ ಸ್ನಾನ ಮಾಡಿದರೆ, ಬಾಧೆ ನಿವಾರಣೆಯಾಗುತ್ತದೆ. ಅಲ್ಲದೆ, ವಿಶೇಷವೆಂದರೆ ಈ ಕೊಳದಲ್ಲಿ ಕಪ್ಪೆಗಳಿಲ್ಲ ಮತ್ತು ನೀರು ಹಾವುಗಳೂ ಇಲ್ಲ. ಇದಕ್ಕೆ ಕಾರಣ, ಋಷಿಯೊಬ್ಬ ತಮ್ಮ ತಪೋಬಲದ ಮೂಲಕ ಅವುಗಳು ಈ ಕೊಳದಲ್ಲಿ ಇರದಂತೆ ಮಾಡಿದ್ದ ಎನ್ನಲಾಗುತ್ತದೆ.
ಈ ಕ್ಷೇತ್ರವನ್ನು ಪುಳ್ಳಿರುಕ್ವೇಲೂರು ಅಂತಲೂ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ದೇವರನ್ನು ಪುಳ್ (ಪಕ್ಷಿ-ಜಟಾಯು), ಋಗ್ವೇದ (ರುಕ್), ಮುರುಗನ ಆಯುಧ (ವೇಲ್) ಮತ್ತು ಸೂರ್ಯ (ಊರ್) ಪೂಜಿಸಿದ್ದಾರೆ.
ವೈದ್ಯನಾಥ ಸ್ವಾಮಿಯಲ್ಲದೆ, ಈ ಕ್ಷೇತ್ರವು ನಾಡಿ ಜ್ಯೋತಿಷ್ಯಕ್ಕೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ತಾಳೆ ಗ್ರಂಥಗಳ ಮೂಲಕ ವ್ಯಕ್ತಿಯೊಬ್ಬನ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ತಿಳಿಯಬಲ್ಲ ಈ ಶಾಸ್ತ್ರದಲ್ಲಿ ಕೇವಲ ಹೆಬ್ಬೆರಳ ಮುದ್ರೆಯ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ಪಟ್ಟಣದ ಅಲ್ಲಲ್ಲಿ ನಾಡಿಜ್ಯೋತಿಷ್ಯ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.
ವೈದ್ಯೇಶ್ವರ ದೇವಾಲಯಕ್ಕೆ ಹೋಗುವುದು ಹೇಗೆ:
ರೈಲು ಮೂಲಕ : ಚೆನ್ನೈ-ತಂಜಾವೂರು ಮಾರ್ಗ ಮಧ್ಯೆ ವೈದ್ಯೇಶ್ವರ ಕೋವಿಲ್ (ದೇವಸ್ಥಾನ) ರೈಲ್ವೈ ನಿಲ್ದಾಣವಿದೆ.
ರಸ್ತೆ ಮಾರ್ಗ: ಇದು ಚೆನ್ನೈಯಿಂದ 235 ಕಿ.ಮೀ. ದೂರದಲ್ಲಿರುವ ಚಿದಂಬರಂನಿಂದ 26 ಕಿ.ಮೀ. ದೂರವಿದೆ.ಚಿದಂಬರಂನಿಂದ 35-40 ನಿಮಿಷದಲ್ಲಿ ದೇವಸ್ಥಾನ ತಲುಪಬಹುದು.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ. ಚೆನ್ನೈಯಿಂದ ರಸ್ತೆ ಅಥವಾ ರೈಲು ಮೂಲಕ ಕ್ಷೇತ್ರ ತಲುಪಬಹುದು. ತಿರುಚ್ಚಿಯಿಂದಲೂ ಹೋಗಬಹುದು. ಆದರೆ ರಸ್ತೆ ಪ್ರಯಾಣ ಮಾತ್ರ ತ್ರಾಸದಾಯಕ.
Wednesday, November 25, 2015
ಲಾಲ್ ಬಹಾದುರ್ ಶಾಸ್ತ್ರಿ
ಲಾಲ್ ಬಹಾದುರ್ ಶಾಸ್ತ್ರಿ
![]() |
|
|---|---|
| ಜನನ: | ಅಕ್ಟೋಬರ್ ೦೨, ೧೯೦೪ |
| ಮರಣ: | ಜನವರಿ ೧೧, ೧೯೬೬ |
| ಜನಿಸಿದ ಸ್ಥಳ: | ಮೊಘಲ್ಸಾರಾಯ್, ಉತ್ತರ ಪ್ರದೇಶ |
| ಭಾರತದ ಪ್ರಧಾನ ಮಂತ್ರಿ | |
| Tenure Order: | 2nd Prime Minister |
| ರಾಜಕೀಯ ಪಕ್ಷ: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
| ಸೇವೆ ಪ್ರಾರಂಭಿಸಿದ್ದು: | ಜೂನ್ ೯, ೧೯೬೪ |
| ಇವರ ಸೇವೆ ಕೊನೆಗೊಂಡಿದ್ದು: | ಜನವರಿ ೧೧, ೧೯೬೬ |
ಪರಿವಿಡಿ
ಜೀವನ
- ಲಾಲ್ ಬಹಾದುರ್ ಮೊಘಲ್ ಸಾರಾಯ್ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.
ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ
- ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
- ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿ. ಮೇ ೨೭, ೧೯೬೪ರಂದು ಜವಾಹರ್ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
- ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.
ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು
- ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
- ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
- ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ಹಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
ಪ್ರಾಮಾಣಿಕ, ಸ್ವಾಭಿಮಾನಿ
ಇವರು ಬಹುಶಃ ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ, ದಕ್ಷರಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ್, ದೇಶಾಭಿ ಮಾನ ಕೂಡ ತಲೆದೂಗುವಂತದ್ದು.ಶಾಸ್ತ್ರಿ ಸೋಮವಾರ
- ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
- ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರ ಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಪ್ರಶಸ್ತಿಗಳು
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.Rangadhamaiah thoremane
ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ
ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ,
ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು
ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ
ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ
ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು
ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು
ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ
ಮಾಡಿ,ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ
ನೆರವಾಗುತ್ತಾನೆ.
ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ,
ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ. ಕೇಸರಿ ನಂದನ, ಹನುಮಂತ,
ರಾಮದೂತ,ದಾಸರಲ್ಲಿ ಶ್ರೇಷ್ಟ. ಭಕ್ತ ಅನಜನೆಯ ಮಾರುತಿ ,ಪವನಪುತ್ರ, ಸು೦ದರ, ವಾಯುಪುತ್ರ ,
ರಾಮಪ್ರಿಯ, ಹನುಮ೦ತ, ಅ೦ಜನೆಯ ,ವಾನರಶ್ರೆಷ್ತೆ, ಕೆಸರಿ ನ೦ದನ ಸೂರ್ಯೋದಯ ಆದ ಸಮಯದಲ್ಲಿ
ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು.
ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ
ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ
ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು
ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ
ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು
ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ
ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ
ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:
ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ
ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ
ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ
ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು
ಇಲ್ಲಿ ಮೆಲಕು ಹಾಕುವುದು ಬೇಡ) – ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ
ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ
ನಮ್ಮಲ್ಲಿರುವ ಆಲಸ್ಯತನವು – ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು,
ಅದಿಲ್ಲದೆ ಜೀವನ ಬಹಳ ಕಷ್ಟ – ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ
ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.
ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು.
ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ
ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು.
ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ.
(ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು
ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ
ರಾಮಪದ ಸೇವಿಪ ವೀರ ಹನುಮಂತ || ಅನುಪಲ್ಲವಿ ||
ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಿಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧ ||
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಿಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧ ||
ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ
ಕುಂಭಿಣಿಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ || ೨ ||
ಕುಂಭಿಣಿಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ || ೨ ||
ಅತಿ ದುರುಳ ರಕ್ಕಸನು ರಥದ ಮೇಲಿರಲು ರಘು
ಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ವವಂತ ಹನುಮಂತ || ೩ ||
ಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ವವಂತ ಹನುಮಂತ || ೩ ||
ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಢ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ || ೪ ||
ದೃಢ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ || ೪ ||
ಪ್ರಥಮದಲ್ಲಿ ಹನುಮಂತ ದ್ವಿತೀಯದಲ್ಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದೆಲೆ ಮೆರೆದೆ ಪುರಂದರವಿಠ್ಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫||ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ. ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.
ತೃತೀಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದೆಲೆ ಮೆರೆದೆ ಪುರಂದರವಿಠ್ಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫||ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ. ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.
Subscribe to:
Comments (Atom)


